ತಾನು ದೆಹಲಿಗೆ ಭೇಟಿ ನೀಡುವುದು ಪೂರ್ವ ನಿಯೋಜಿತವಾಗಿತ್ತು, ಕೇಂದ್ರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಬೇಕಿದೆ ಎಂದು ಹೇಳಿದ ಸತೀಶ್ ಜಾರಕಿಹೊಳಿ, ಕಾಲ್ತುಳಿತ ಘಟನೆಗೆ ಯಾರು ಕಾರಣ, ತಪ್ಪಿತಸ್ಥರು ಯಾರು ಅಂತ ವರದಿ ಬಂದ ನಂತರವೇ ಗೊತ್ತಾಗುತ್ತದೆ, ವರದಿಗಾಗಿ ಇನ್ನೂ 15ದಿನ ಇಲ್ಲವೇ ಒಂದು ತಿಂಗಳು ಕಾಯದೆ ವಿಧಿಯಿಲ್ಲ ಎಂದರು.