ಮುಖ್ಯಮಂತ್ರಿಯವರ ಕುಟುಂಬಕ್ಕೆ ಕ್ಲೀನ್ ಚಿಟ್ ಕೊಡುವುದು ಸಾಧ್ಯವೇ ಇಲ್ಲ, ಯಾಕೆಂದರೆ ಮುಡಾದಲ್ಲಿ ಅವರು ನಡೆಸಿರುವ ಅಕ್ರಮಕ್ಕೆ ಸೂಕ್ತ ದಾಖಲಾತಿಗಳನ್ನು ಒದಗಿಸಲಾಗಿದೆ ಎಂದು ಕೃಷ್ಣ ಹೇಳುತ್ತಾರೆ. ಮುಡಾ ಅಧಿಕಾರಿಗಳಿಂದ ಪ್ರಮಾದ ಜರುಗಿದೆ ಎಂದು ಲೋಕಾಯುಕ್ತ ಹೇಳುತ್ತದೆ, ಅದು ನಿಜವೇ ಆಗಿದ್ದಲ್ಲಿ ಬೇರೆಯವರ ವಿಷಯದಲ್ಲೂ ಅವರಿಂದ ತಪ್ಪು ಜರುಗಿರಬೇಕಲ್ಲ ಎಂದು ಕೃಷ್ಣ ಪ್ರಶ್ನಿಸುತ್ತಾರೆ.