ನೆಲಮಂಗಲ: ರಾತ್ರಿ ವೇಳೆ ಬಾಗಿಲು ಬಡಿದು ಭೀತಿಗೊಳಿಸುವ ನೈಜೀರಿಯಾ ಮಹಿಳೆ

ನೆಲಮಂಗಲ, ನ.12: ಬೆಂಗಳೂರು ಉತ್ತರ ತಾಲೂಕಿನ ಪಿಳ್ಳಳ್ಳಿ ಗ್ರಾಮದಲ್ಲಿ ನೈಜೀರಿಯಾದ ಮಳೆಯೊಬ್ಬಳು ರಾತ್ರಿ ವೇಳೆ ಮನೆಮನೆಗೆ ತೆರಳಿ ಬಾಗಿಲು ಬಡಿದು ಕಾಟ ಕೊಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಮನೆ ಬಾಗಿಲು ಬಡಿದು ಮನೆ ಮಂದಿಯನ್ನು ಭೀತಿಗೊಳಿಸಿ ಸ್ಥಳದಿಂದ ಪರಾರಿಯಾಗುತ್ತಾಳೆ. ನೈಜೀರಿಯ ಮಹಿಳೆಯ ಈ ಕೃತ್ಯ ಯಶೋಧ ಬಸವರಾಜ್ ದಂಪತಿ ಮನೆಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.