ಸಿಖ್ಖರ ಮೆರವಣಿಗೆ ವೇಳೆ ಥಾರ್ ಕಾರಿನಲ್ಲಿ ಡಿಕ್ಕಿ; ಜನರಿಂದ ಪೊಲೀಸ್ ಮಗನ ವಾಹನ ಪುಡಿ ಪುಡಿ

ಜೈಪುರ: ಜನವರಿ 2ರಂದು ಜೈಪುರದಲ್ಲಿ ಪೊಲೀಸ್ ಅಧಿಕಾರಿಯ ಮಗನು ಓಡಿಸಿದ ಕೆಂಪು ಮಹೀಂದ್ರಾ ಥಾರ್ ಸಿಖ್ಖರ ಮೆರವಣಿಗೆ ವೇಳೆ ಜನಸಂದಣಿಯ ಮೇಲೆ ನುಗ್ಗಿತು. ಇದರ ಪರಿಣಾಮವಾಗಿ ಇಬ್ಬರು ಗಾಯಗೊಂಡಿದ್ದಾರೆ. ಸಿಖ್ ಸಮುದಾಯದ ಸುಮಾರು 300 ಜನರು ಗುರುವಾರ ಸಂಜೆ ಕೀರ್ತನೆ ಮಾಡಲು ಜಮಾಯಿಸಿದ್ದರು. ಜೈಪುರದ ಆದರ್ಶನಗರ ಪ್ರದೇಶದಲ್ಲಿ ರಾತ್ರಿ 8.30ಕ್ಕೆ ಈ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯಲ್ಲಿ ಓರ್ವ ವೃದ್ಧ ಹಾಗೂ ಮಗು ಗಾಯಗೊಂಡಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.