ಕಾಲೇಜು ಆವರಣದಲ್ಲಿ ಒಬ್ಬ ಯುವತಿ ಬರ್ಬರ ಹತ್ಯೆಯಾಗುತ್ತದೆ ಅಂದರೆ ನಮ್ಮ ರಾಜ್ಯದಲ್ಲಿ ಮಹಿಳೆಯರಿಗೆ ಎಷ್ಟರಮಟ್ಟಿಗೆ ರಕ್ಷಣೆ ಮತ್ತು ಸುರಕ್ಷತೆ ಇದೆ ಅನ್ನೋದು ಗೊತ್ತಾಗುತ್ತದೆ. ಕೊಲೆ ಕಳೆದ ಗುರುವಾರ ನಡೆದರೂ ರಾಜ್ಯದ ಮುಖ್ಯಮಂತ್ರಿಯವರು ನೇಹಾ ಪೋಷಕರೊಂದಿಗೆ ಮಂಗಳವಾರ ಮಾತಾಡುತ್ತಾರೆ. ಪಾಪ, ಚುನಾವಣೆಯಲ್ಲಿ ಬ್ಯೂಸಿಯಾಗಿರುವ ಅವರಿಗೆ ಪುರಸೊತ್ತು ಎಲ್ಲಿಂದ ಸಿಕ್ಕೀತು ಎಂದು ಮಾಳವಿಕಾ ಕುಹಕವಾಡಿದರು.