ದೇವಸ್ಥಾನಗಳ (Temples) ಆವರಣದಲ್ಲಿ, ಅಕ್ಕಪಕ್ಕದಲ್ಲಿರುವ ಬಾವಿ, ಕೊಳ, ನದಿಗಳಲ್ಲಿ ಭಕ್ತರು ಭಕ್ತಿಯಿಂದ ಬೇಡಿ ನಾಣ್ಯಗಳನ್ನು (Coins) ಎಸೆಯುವುದನ್ನು ನಾವು ಸಾಮಾನ್ಯವಾಗಿ ಗಮನಿಸಿರುತ್ತೇವೆ. ಆದರೆ ನಾಣ್ಯಗಳನ್ನು ಈ ರೀತಿ ಕೊಳದಲ್ಲಿ ಎಸೆಯಲು ಕಾರಣವೇನು? ಕೊಳದೊಳಗೆ ನಾಣ್ಯ ಹಾಕಿದರೆ ಅದೃಷ್ಟ ಬರುತ್ತದಾ? ನಾಣ್ಯವನ್ನು ನೀರಿನಲ್ಲಿ ಎಸೆಯುವುದು ಮೂಢನಂಬಿಕೆಯಾ? ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಮಾಹಿತಿ ನೀಡಿದ್ದಾರೆ.