ನೂರಾರು ಹೆಚ್ಚುವರಿ ಬಸ್ ಬಿಟ್ರೂ ಸಾಲ್ತಿಲ್ಲ!

ದೀಪಾವಳಿ, ಕನ್ನಡ ರಾಜ್ಯೋತ್ಸವ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧೆಡೆ ತಮ್ಮ ಊರುಗಳಿಗೆ ತೆರಳಿದ್ದ ಲಕ್ಷಾಂತರ ಜನ ಬೆಂಗಳೂರಿಗೆ ವಾಪಸಾಗಲು ಪರದಾಡಿದರು. ಕೆಎಸ್​ಆರ್​ಟಿಸಿ ಹೆಚ್ಚುವರಿಯಾಗಿ ನೂರಾರು ವಿಶೇಷ ಬಸ್​ಗಳ ವ್ಯವಸ್ಥೆ ಮಾಡಿದ್ದರೂ ಬಸ್​ ನಿಲ್ದಾಣಗಳಲ್ಲಿ, ಬಸ್​ಗಳಲ್ಲಿ ವಿಪರೀತ ಜನಜಂಗುಳಿ, ನೂಕುನುಗ್ಗಲು ಕಾಣಿಸಿತು.