ಬಿಜೆಪಿ ಶಾಸಕ ಸುನೀಲ ಕುಮಾರ

ಸಿಟಿ ರವಿ ಅವರೊಂದಿಗೆ 1992 ರಲ್ಲಿ ಚಿಕ್ಕಮಗಳೂರಿನ ಅಲ್ದೂರಿನಿಂದ ಹೊರಟು ತಾನೂ ಸಹ ಅಯೋಧ್ಯೆ ಕರಸೇವೆಯಲ್ಲಿ ಭಾಗಿಯಾಗಿದ್ದಾಗಿ ಸುನೀಲ ಕುಮಾರ ಹೇಳಿದರು. ಕರಸೇವೆಯಲ್ಲಿ ಭಾಗವಹಿಸಿದವರೆಲ್ಲರನ್ನು ಬಂಧಿಸಬೇಕೆಂಬ ಅಭಿಯಾನವನ್ನು ರಾಜ್ಯಾದ್ಯಂತ ನಡೆಸುತ್ತೇವೆ ಎಂದು ಹೇಳಿದ ಅವರು ಸಿದ್ದರಾಮಯ್ಯ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ಸಹಕಾರ ನೀಡುವ ಬದಲು ವಿರೋಧಿಸುತ್ತಿದೆ ಎಂದರು.