ಲೋಕಸಭಾ ಚುನಾವಣೆಯ ಎಲ್ಲ ಫಲಿತಾಂಶಗಳು ಹೊರಬಿದ್ದ ಬಳಿಕ ಬಿಜೆಪಿ ಕಚೇರಿ ಮುಂಭಾಗದಲ್ಲಿ ಅಶೋಕ, ವಿಜಯೇಂದ್ರ ಮತ್ತು ಸಿಟಿ ರವಿ ಸಾವಿರಾರು ಕಾರ್ಯಕರ್ತರೊಂದಿಗೆ ಸಂಭ್ರಮ ಆಚರಿಸಿದರು. ಬ್ಯಾಂಡು ಬಾಜಾದ ಸದ್ದಿಗೆ ಕಾರ್ಯಕರ್ತರೇನೋ ಕುಣಿಯುತ್ತಿದ್ದರು, ಅದರೆ ಈ ಮೂವರು ಮಾತ್ರ ಕುಣಿಯಲೊಲ್ಲರು, ಕೊನೆಗೆ ಅವರ ಆಗ್ರಹಕ್ಕೆ ಮಣಿದು ವಿಜಯೇಂದ್ರ ಎರಡೂ ಕೈ ಮೇಲೆತ್ತಿ ಚಪ್ಪಾಳೆ ಬಾರಿಸುತ್ತಾ ಮೈಯನ್ನು ಒಂದರೆಕ್ಷಣ ಟ್ವಿಸ್ಟ್ ಮಾಡಿದರು.