ಡಾ ಸಿಎನ್ ಮಂಜುನಾಥ್

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್ ಐಆರ್ ದಾಖಲಾಗಿದೆ ಮತ್ತು ತಾವು ಕೂಡ ಡಿಐಜಿ ಜೊತೆ ಮಾತಾಡಿರುವುದಾಗಿ ಡಾ ಮಂಜುನಾಥ್ ಹೇಳಿದರು. ಇಂಥ ಘಟನೆಗಳಿಂದ ಮತದಾರರು ಭಯಭೀತರಾಗೋದು ಸ್ವಾಭಾವಿಕ, ಆದರೆ ತಮ್ಮ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು, ಆತಂಕಕ್ಕೊಳಗಾಗಬಾರದು, ಎರಡೂ ಪಕ್ಷಗಳ ಹಿರಿಯ ನಾಯಕರು ಅವರ ಜೊತೆಗಿದ್ದಾರೆ ಎಂದು ಅವರು ಹೇಳಿದರು.