ಬೀದರ್ನಲ್ಲಿ ಸೋಮವಾರ ನಡೆದ ಡಾ. ಬಿಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲೇ ಸಚಿವ ಈಶ್ವರ್ ಖಂಡ್ರೆ ಹಾಗೂ ಬಿಜೆಪಿ ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ ನಡೆಸಿದ್ದಾರೆ. ಖಂಡ್ರೆ ಚುನಾವಣಾ ಭಾಷಣ ಮಾಡಿದ್ದಾರೆ ಎಂದು ಬೆಲ್ದಾಳೆ ಆರೋಪಿಸಿದರೆ, ನಂತರ ಮಾತನಾಡಿದ ಖಂಡ್ರೆ, ಇನ್ನೂ ಕೆಲವು ವಿಷಯ ಹೇಳಿದರೆ ಇವರು ವೇದಿಕೆಯಿಂದಲೇ ನಿರ್ಗಮಿಸಬೇಕಾಗುತ್ತದೆ ಎಂದರು.