ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ

ಸತೀಶ್ ಜಾರಕಿಹೊಳಿ ಒಬ್ಬ ಸೀನಿಯರ್ ಕಾಂಗ್ರೆಸ್ ನಾಯಕ ಮತ್ತು ಸಚಿವನಾಗಿದ್ದಾಗ್ಯೂ ಸುರ್ಜೇವಾಲಾ ಕರೆದು ಮಾತಾಡುವ ಅವಶ್ಯಕತೆಯಿತ್ತೇ ಎಂದು ಕೇಳಿದಾಗ ಗೊಂದಲಕ್ಕೆ ಬಿದ್ದಂತೆ ಕಂಡ ಜಾರಕಿಹೊಳಿ ನಂತರ ಸಾವರಿಸಿಕೊಂಡು, ಅದರಲ್ಲಿ ತಪ್ಪೇನಿಲ್ಲ, ಇಲಾಖೆಯಲ್ಲಿ ಅಥವಾ ತನ್ನಿಂದ ತಪ್ಪುಗಳಾಗಿದ್ದರೆ ತಿದ್ದಿಕೊಳ್ಳುವ ಅವಕಾಶವಿದೆ, ಅವುಗಳನ್ನು ಸರಿಮಾಡಿಕೊಳ್ಳುತ್ತೇವೆ ಎಂದು ಹೇಳಿದರು.