ಚಿತ್ರರಂಗದಲ್ಲಿ ದರ್ಶನ್ ಮತ್ತು ಗುರು ಕಿರಣ್ ಜೊತೆಯಾಗಿ ಕೆಲಸ ಮಾಡಿದವರು. ಆ ಹಿನ್ನೆಲೆಯಲ್ಲಿ ಗುರು ಕಿರಣ್ ಅವರು ದರ್ಶನ್ ಕುರಿತು ಪ್ರತಿಕ್ರಿಯಿಸಿದ್ದಾರೆ. ‘ಸ್ನೇಹಿತನಾಗಿ ದರ್ಶನ್ ಹೊರಗೆ ಬರಬೇಕು ಅಂತ ನಾವು ಹೇಳುತ್ತೇವೆ. ಆದರೆ ಕಾನೂನಿಗೆ ಅದರದ್ದೇ ಆದ ಪ್ರಕ್ರಿಯೆ ಇದೆ. ಪೊಲೀಸ್ನವರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ. ದರ್ಶನ್ ತಪ್ಪು ಮಾಡಿದ್ದರೆ ಕಾನೂನು ಕ್ರಮ ಆಗಲಿ’ ಎಂದಿದ್ದಾರೆ ಗುರು ಕಿರಣ್.