ಕಿಡ್ನ್ಯಾಪಿಂಗ್ ಕೇಸಲ್ಲೂ ಅವರನ್ನು ಬಂಧಿಸಲ್ವಾ ಅಂದಾಗ ಪರಮೇಶ್ವರ್ ಸಹನೆ ಕಳೆದುಕೊಂಡು, ಬಂಧನಗಳು ಆಗುತ್ತೇ ರೀ, ಎಲ್ಲ ವಿವರಗಳನ್ನು ಮಾಧ್ಯಮದವರಿಗೆ ಹೇಳಲಾಗಲ್ಲ ಅಂತ ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಇಲ್ಲಿ ಎಲ್ಲ ಸಂತ್ರಸ್ತೆಯರು ಮತ್ತು ಅವರಿಗಾಗಿ ಮರುಗುತ್ತಿರುವ ಕನ್ನಡಿಗರು ಅಂದುಕೊಳ್ಳುತ್ತಿರುವುದೇನೆಂದರೆ, ರೇವಣ್ಣ ಮತ್ತು ಪ್ರಜ್ವಲ್ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಸರ್ಕಾರ ಇದೇ ಉಡಾಫೆ ಧೋರಣೆ ಪ್ರದರ್ಶಿಸುತ್ತಿತ್ತೇ?