ಶ್ರೀರಾಮುಲು ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ಮಾತುಗಳಲ್ಲಿ ಗೊಂದಲ

ಪಕ್ಷದವರೆಲ್ಲ ಒಂದಾಗಬೇಕು ಎಂದು ಶ್ರೀರಾಮುಲು ಒಗ್ಗಟ್ಟಿನ ಮಂತ್ರ ಜಪಿಸುತ್ತಾರೆ. ಎಲ್ಲರೂ ಒಂದಾಗಿ ಜನರಲ್ಲಿ ವಿಶ್ವಾಸ ತುಂಬಬೇಕು ಆಗಲೇ ಬಿಜೆಪಿ ಪುನಃ ಅಧಿಕಾರಕ್ಕೆ ಬರೋದು ಸಾಧ್ಯ ಅಂತ ಅವರು ಹೇಳೋದ್ರಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಕೆಎಸ್ ಈಶ್ವರಪ್ಪನವರ ಉಲ್ಲೇಖ ಕೂಡ ಇದೆಯಾ ಅಂತ ಗೊಂದಲವೇರ್ಪಡುತ್ತದೆ. ಶ್ರೀರಾಮುಲು ಮಾತಾಡೋದೇ ಹಾಗೆ, ಸ್ಟಷ್ಟವಾಗಿ ಯಾವುದನ್ನೂ ಹೇಳಲ್ಲ.