ಜನರಿಗೆ ಹತ್ತಿರವಾಗಿರುವ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಆರಿಸುತ್ತೇವೆ ಅಂತ ಶಿವಕುಮಾರ್ ಯದುವೀರ್ ಅವರನ್ನು ಟಾರ್ಗೆಟ್ ಮಾಡಿ ಹೇಳಿದ್ರಾ ಅಂತ ಅನಿಸುತ್ತದೆ. ಯಾಕೆಂದರೆ, ಯದುವೀರ್ ಅವರ ಸಾರ್ವಜನಿಕ ಬದುಕಿನ ಬಗ್ಗೆ ಜನರಿಗೆ ಗೊತ್ತಿಲ್ಲ. ಅವರು ಸಾಮಾನ್ಯ ಜನರೊಂದಿಗೆ ಇರೋದನ್ನು, ಅವರೊಂದಿಗೆ ಮಾತಾಡುವದನ್ನು ಜನ ನೋಡಿಲ್ಲವೆಂದೇ ಹೇಳಬೇಕು. ದಸರಾ ಸಮಯ ಬಿಟ್ಟರೆ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಯದುವೀರ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.