ಶಿವಕುಮಾರ್ ಅವರಲ್ಲ್ಲಿ ಅತ್ಯುತ್ತಮ ನಾಯಕತ್ವದ ಗುಣಗಳಿವೆ, ನಾನೊಬ್ಬ ಅಲೆಮಾರಿ ಜನಾಂಗದವನು, ಅವರು ನನ್ನನ್ನು ಗುರುತಿಸಿ ಕೋಲಾರ ಸಾಮಾನ್ಯ ಕ್ಷೇತ್ರವಾದರೂ ನನಗೆ ಟಿಕೆಟ್ ಕೊಟ್ಟರು, ಇಲ್ಲಿ ನಮ್ಮ ಜನಾಂಗದ ಕೇವಲ 1,200 ವೋಟು ಮಾತ್ರ ಇವೆ. ಆದರೂ ನಾನು ಗೆದ್ದೆ, ಅದಕ್ಕೆಲ್ಲ ಶಿವಕುಮಾರ್ ಅವರೇ ಕಾರಣ, ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಖಂಡಿತ ಇದೆ, ಸ್ವಲ್ಪ ಕಾಯಬೇಕು ಎಂದು ಕೊತ್ತೂರು ಮಂಜುನಾಥ್ ಹೇಳಿದರು.