ಎಐಸಿಸಿಯ ಕರ್ನಾಟಕ ಉಸ್ತುವಾರಿಯಾಗಿರುವ ರಂದೀಪ್ ಸುರ್ಜೆವಾಲ ಅವರು ಮಧ್ಯಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಮಗ್ನರಾಗಿರುವುದರಿಂದ ಅಧ್ಯಕ್ಷರ ನೇಮಕಾತಿ ಕೆಲಸ ವಿಳಂಬಗೊಳ್ಳುತ್ತಿದೆ ಎಂದು ಶಿವಕುಮಾರ್ ಹೇಳಿದರು. ಪಕ್ಷದ ಹಲವಾರು ಶಾಸಕರು ನಿಗಮ/ ಮಂಡಳಿಗಳಿಗೆ ಪದಾಧಿಕಾರಿಗಳ ನೇಮಕಾತಿ ವಿಳಂಬಗೊಳ್ಳುತ್ತಿರುವ ಕಾರಣಕ್ಕೆ ಮುನಿಸಿಕೊಂಡು ಬಂಡಾಯ ಪ್ರವೃತ್ತಿ ಪ್ರದರ್ಶಿಸುತ್ತಿರೋದು ಸುಳ್ಳಲ್ಲ.