ತುಮಕೂರಲ್ಲೂ ಶಿವಕುಮಾರ್ ಗೆ ಅಸಂಖ್ಯಾತ ಅಭಿಮಾನಿಗಳು, ಭರ್ಜರಿ ಸ್ವಾಗತ

ವೇದಿಕೆಗೆ ಶಿವಕುಮಾರ್ ಆಗಮಿಸಿದಾಗ ನೆರೆದಿದ್ದ ಜನ ಶಿಳ್ಳೆ ಚಪ್ಪಾಳೆಯೊಂದಿಗೆ ಅವರನ್ನು ಸ್ವಾಗತಿಸಿದರು. ರಾಜಣ್ಣ ಅವರ ಮಗ ರಾಜೇಂದ್ರ ರಾಜಣ್ಣ ಶಿವಕುಮಾರ್​ರನ್ನು ವೇದಿಕೆಗೆ ಕರೆತಂದರು. ಶಿವಕುಮಾರ್ ಮತ್ತು ರಾಜಣ್ಣ ಅಕ್ಕಪಕ್ಕದಲ್ಲಿ ಕುಳಿತಿದ್ದರು ಮತ್ತು ಅವರ ನಡುವೆ ಗಹನವಾದ ಚರ್ಚೆ ನಡೆದಿತ್ತು. ತಮ್ಮ ಭಾಷಣದಲ್ಲೂ ಉಪ ಮುಖ್ಯಮಂತ್ರಿಯವರು ಸಹಕಾರ ಸಚಿವರನ್ನು ವಿಶೇಷವಾಗಿ ಕೊಂಡಾಡಿದರು.