ಹೆಚ್ ಡಿ ಕುಮಾರಸ್ವಾಮಿ

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದಾಗ ಕುಮಾರಸ್ವಾಮಿ ಸಿಂಗಾಪುರ್ ನಲ್ಲಿದ್ದರು, ಯಾಕೆ ಏನು ಅಂತ ಯಾರಿಗೂ ಗೊತ್ತಿಲ್ಲ. ಅವರ ಪಕ್ಷಕ್ಕೆ ಕೇವಲ 19 ಸ್ಥಾನಗಳು ಮಾತ್ರ ದಕ್ಕಿದಾಗ ತೀವ್ರ ಹತಾಶರಾಗಿದ್ದ ಅವರು ಮೂರು ತಿಂಗಳಲ್ಲಿ ಕಾಂಗ್ರೆಸ್ ಉರುಳುತ್ತೆ ಅಂತ ಹೇಳಿದ್ದರು. ಅಮೇಲೆ ಅದನ್ನು ಡಿಸೆಂಬರ್ ವರೆಗೆ ವಿಸ್ತರಿಸಿದರು. ಡಿಸೆಂಬರ್ ನಲ್ಲಿ ಅಂಥ ಲಕ್ಷಣ ಕಾಣದಿರುವ ಹಿನ್ನೆಲೆಯಲ್ಲಿ ಮೇನಲ್ಲಿ ಸರ್ಕಾರ ಉರುಳುತ್ತೆ ಅಂತಿದ್ದಾರೆ.