ಕೆಫೆಯಲ್ಲಿ ಬಾಂಬ್ ಇಟ್ಟವನ ಚಲನವಲನಗಳ ಸಿಸಿಟಿವಿ ಫುಟೇಜ್ ಲಭ್ಯವಾಗಿದ್ದರೂ ಅವನ ಬಗ್ಗೆ ಇನ್ನೂ ಸುಳಿವಿಲ್ಲ. ಅವನು ಪಾತಾಳದಲ್ಲಿ ಅಡಗಿ ಕೂತಿದ್ದರೂ ಪೊಲೀಸರಾಗಲೀ ಬೇರೆ ಬೇರೆ ಏಜೆನ್ಸಿಗಳ ತನಿಖಾಧಕಾರಿಗಳಾಗಲೀ ಹೊರಗೆಳೆದು ತರುತ್ತಾರೆ ಅದರಲ್ಲಿ ಅನುಮಾನವೇ ಬೇಡ, ಆದರೆ ಅವನ ದುಷ್ಕೃತ್ಯದಿಂದಾಗಿ ಬೆಂಗಳೂರು ನಿವಾಸಿಗಳ ನೆಮ್ಮದಿ ಹಾಳಾಗಿದ್ದು ಸುಳ್ಳಲ್ಲ.