ಕುಮಾರಸ್ವಾಮಿಯವರ ಆರೋಗ್ಯ ಸ್ಥಿರವಾಗಿದೆ, ಅತಂಕಪಡುವ ಅವಶ್ಯಕತೆಯಿಲ್ಲ, ಊಟ-ತಿಂಡಿ ಸೇವಿಸುತ್ತಿದ್ದಾರೆ ಎಂದು ಶ್ರೀಗಳು ಹೇಳಿದರು. ಅವರನ್ನು ತೀವ್ರ ನಿಗಾ ಘಟಕದಿಂದ ವಾರ್ಡ್ ಶಿಫ್ಟ್ ಮಾಡಲಾಗಿದೆ, ವಿಶ್ರಾಂತಿಯ ಅವಶ್ಯಕತೆ ಇರೋದ್ರಿಂದ ಆಸ್ಪತ್ರೆಯಲ್ಲೇ ಇಟ್ಟಿಕೊಳ್ಳಲಾಗಿದೆ, ಎರಡು ದಿನಗಳ ನಂತರ ಡಿಸ್ಚಾರ್ಜ್ ಮಾಡಲಾಗುವುದು ಎಂದು ಶ್ರೀಗಳ ಜೊತೆ ಬಂದಿದ್ದ ವೈದ್ಯ ಹೇಳಿದರು.