ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ

ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದಲ್ಲಿ ರಥಯಾತ್ರೆ ನಡೆಯುತ್ತಿದ್ದು ಇದರಲ್ಲಿ ಕೈಗಾರಿಕೋದ್ಯಮಿ ಹಾಗೂ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ತಮ್ಮ ಕುಟುಂಬದೊಂದಿಗೆ ಪಾಲ್ಗೊಂಡಿದ್ದಾರೆ. ಪುರಿಯ ಇಸ್ಕಾನ್ ಅಡುಗೆಮನೆಯಲ್ಲಿ ನಡೆದ 'ಪ್ರಸಾದ ಸೇವೆ'ಯ ಭಾಗವಾಗಿ 'ಪ್ರಸಾದ' ತಯಾರಿಕೆಯಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಕೂಡ ಸೇರಿಕೊಂಡಿದ್ದಾರೆ. ಜೂನ್ 26ರಿಂದ ಆರಂಭವಾಗಿರುವ ಈ ರಥಯಾತ್ರೆ ಜುಲೈ 8ರವರೆಗೆ ನಡೆಯಲಿದೆ.