‘ಸಮಾಧಾನಕರ ಉತ್ತರ ಬಂದ್ರೆ ನಾನು ರವಿಚಂದ್ರನ್ ಹೇಳಿದಂತೆ ಕೇಳ್ತೀನಿ’; ಎಂಎನ್ ಕುಮಾರ್

ಎಂಎನ್ ಕುಮಾರ್ ಹಾಗೂ ಸುದೀಪ್ ನಡುವಿನ ಜಟಾಪಟಿ ಹೊಸ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಸುದೀಪ್ ಅವರು ಈ ಪ್ರಕರಣವನ್ನು ಕೋರ್ಟ್ನಲ್ಲೇ ಬಗೆಹರಿಸಿಕೊಳ್ಳುತ್ತೇನೆ ಎನ್ನುತ್ತಿದ್ದಾರೆ. ಇದರ ಇತ್ಯರ್ಥ ಫಿಲ್ಮ್ ಚೇಂಬರ್ನಲ್ಲೇ ಆಗಬೇಕು ಎಂದು ಕುಮಾರ್ ಪಟ್ಟು ಹಿಡಿದಿದ್ದಾರೆ. ಈಗ ಈ ಪ್ರಕರಣದಲ್ಲಿ ರಾಜಿ ಮಾಡಿಸಲು ಶಿವರಾಜ್ಕುಮಾರ್ ಹಾಗೂ ರವಿಚಂದ್ರನ್ ಅವರ ಎಂಟ್ರಿ ಆಗಿದೆ. ‘ರವಿಚಂದ್ರನ್ ಅವರನ್ನು ನಾನು ಭೇಟಿ ಮಾಡುತ್ತೇನೆ. ಸಮಾಧಾನಕರ ಉತ್ತರ ಬಂದ್ರೆ ನಾನು ರವಿಚಂದ್ರನ್ ಹೇಳಿದಂತೆ ಕೇಳ್ತೀನಿ’ ಎಂದು ಕುಮಾರ್ ಹೇಳಿದ್ದಾರೆ.