ವಿರೋಧ ಪಕ್ಷದ ನಾಯಕರು ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ಕಿತ್ತು ಬಂದಿರುವ ಮತ್ತು ಜಲಾಶಯ ಮೇಲ್ಭಾಗದಲ್ಲಿ ಅಲ್ಲಲ್ಲಿ ಬಿರುಕುಗಳು ಕಾಣಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಸಲಿಗೆ ಟಿಬಿ ಡ್ಯಾಂ ನಿಗಮದ ಅಧಿಕಾರಿಗಳನ್ನು ಇಲ್ಲಿ ಕಟಕಟೆಯಲ್ಲಿ ನಿಲ್ಲಿಸಬೇಕಾಗುತ್ತದೆ. ಕ್ರೆಸ್ಟ್ ಗೇಟ್ ಮುರಿದಿರುವ ಸಂಗತಿ ಅವರ ಗಮನಕ್ಕೆ ಬಂದಿಲ್ಲವೆಂದರೆ ಅದು ನಿಜಕ್ಕೂ ಆಘಾತಕಾರಿ ವಿಷಯ.