ಕೇವಲ 5 ದಿನಗಳ ಹಿಂದೆ ಬಿಲ್ ಗಳನ್ನು ಕ್ಲೀಯರ್ ಮಾಡಲು ಅಧಿಕಾರಿಗಳು 40 ಪರ್ಸೆಂಟ್ ಲಂಚ ಕೇಳುತ್ತಿದ್ದಾರೆ ಅಂತ ಕೆಂಪಣ್ಣ ಹೇಳಿದ್ದರು. ಏನ್ಸಾರ್ ಒಂದು ವಾರದೊಳಗೆ ಉಲ್ಟಾ ಹೊಡೀತೀದ್ದೀರಾ ಅಂತ ಮಾಧ್ಯಮಗಳು ಕೇಳಿದಾಗ, ಸಿಡುಕಿದ ಕೆಂಪಣ್ಣ, ತಮ್ಮ ಹೇಳಿಕೆಗೆ ಈಗಲೂ ಬದ್ಧ ಅಂತ ಹೇಳಿ ಪ್ಯಾಕೇಜ್ ಸಿಸ್ಟಂನಲ್ಲಿ ನೀಡುವ ಕಾಮಗಾರಿಗಳಿಗೆ ಕಮೀಶನ್ ಕೇಳಲಾಗುತ್ತಿದೆ, ಅದನ್ನು ರದ್ದು ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾಗಿ ಹೇಳಿದರು.