ಕೆಎಸ್ ಈಶ್ವರಪ್ಪ ಸುದ್ದಿಗೋಷ್ಟಿ

ತಾನು ಸ್ಪರ್ಧಿಸಿದ ಉದ್ದೇಶ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ ಎಂದು ಅವರಿಂದು ಹೇಳಿದರು. ಈಗಲೂ ಅವರು ಭ್ರಮೆಯಲ್ಲಿದ್ದಾರೆ ಅಂತ ಅವರ ಮಾತುಗಳಿಂದ ವಿದಿತವಾಗುತ್ತದೆ. ಚುನಾವಣೆ ಸಮಯದಲ್ಲಿ ಹೇಳುತ್ತಿದ್ದ ಪಕ್ಷದ ಶುದ್ಧೀಕರಣ, ಅಪ್ಪ ಮಕ್ಕಳ ಕಪಿಮುಷ್ಠಿಯಿಂದ ಬಿಜೆಪಿಯನ್ನು ಬಿಡಿಸುವುದು-ಮೊದಲಾದ ಸಂಗತಿಗಳನ್ನು ಈಗಲೂ ಹೇಳುತ್ತಿದ್ದಾರೆ.