ಸಕ್ಕರೆನಗರಿ ಮಂಡ್ಯ ಜಿಲ್ಲೆಯಲ್ಲಿ ಬಹುತೇಕ ರೈತರು ವಾಣಿಜ್ಯ ಬೆಳೆಯಾಗಿ ತೆಂಗು ಬೆಳೆಯನ್ನ ಪ್ರಮುಖವಾಗಿ ಬೆಳೆಯುತ್ತಾರೆ.ಆದರೆ ಇದೀಗ ತೆಂಗು ಬೆಳೆಗೆ ಕಪ್ಪುತಲೆ ಹುಳುವಿನ ಕಾಟ ಆರಂಭವಾಗಿದ್ದು, ತೆಂಗು ಬೆಳೆಗಾರರು ಕಂಗಾಲಾಗಿದ್ದಾರೆ. ಈ ಕುರಿತು ಒಂದು ವರದಿ. ಹೌದು ರೈತರ ಪಾಲಿನ ಕಲ್ಪವೃಕ್ಷ ತೆಂಗಿನ ಮರಕ್ಕೆ ಇದೀಗ ಕಪ್ಪುತಲೆ ಹುಳುವಿನ ಭಾದೆ ಆವರಿಸಿದೆ. ಮಂಡ್ಯ ಜಿಲ್ಲೆಯ ಮೂರು ತಾಲೂಕಿನ ಕೆಲ ಗ್ರಾಮಗಳಲ್ಲಿ ತೆಂಗಿನ ಮರಗಳಲ್ಲಿ ಈ ರೋಗಿ ಕಾಣಿಸಿಕೊಂಡಿದ್ದು, ತೆಂಗು ಬೆಳೆಗಾರರನ್ನ ಕಂಗಾಲಾಗಿದೆ. ಅಂದಹಾಗೆ ಈಗಾಗಲೇ ತೆಂಗು ಬೆಳೆಗೆ ನುಸಿರೋಗ, ಕಾಂಡಕೊರಕ ಹುಳು ರೋಗಗಳು ಕೂಡ ತಗುಲಿ ರೈತರು ಪರದಾಡುತ್ತಿದ್ದಾರೆ. ಈ ಮಧ್ಯೆ ಇದೀಗ ಕಪ್ಪು ಹುಳುವಿನ ಕಾಟ ತೆಂಗು ಬೆಳೆಗಾರರನ್ನ ಚಿಂತೆಗೆ ದೂಡಿದೆ. ಅಂದಹಾಗೆ ಈ ರೋಗ ಕಾಣಿಸಿಕೊಂಡ ಮರಗಳ ಗರಿಗಳು ಸಂಪೂರ್ಣವಾಗಿ ಒಣಗಲಾರಂಭಿಸುತ್ತವೆ. ಮೊದಮೊದಲು ಒಂದು ಗರಿಯಲ್ಲಿ ಕಾಣಿಸಿ ನಂತರ ಇಡೀ ಮರದ ಗರಿಗಳಲ್ಲಿ ಕಾಣಿಸಿಕೊಂಡು ಕೆಲವೇ ದಿನಗಳಲ್ಲಿ ಇಡೀ ತೋಟವನ್ನೇ ಆವರಿಸಿಕೊಂಡು ಬಿಡುತ್ತವೆ. ಅಷ್ಟೇ ಅಲ್ಲದೇ ಇಳುವರಿ ಕೂಡ ಕಡಿಮೆ ಆಗುತ್ತವೆ. ವಿಧಿಯಿಲ್ಲದೆ ಮರವನ್ನೇ ಕಡಿಯುವ ಹಂತಕ್ಕೆ ರೈತರು ಹೋಗಬೇಕಾಗುತ್ತದೆ. ಇದು ತೆಂಗು ಬೆಳೆಗಾರರಿಗೆ ದೊಡ್ಡ ತಲೆನೋವಾಗಿ ಪರಣಮಿಸಿದೆ.