ಬಿಅರ್ ಪಾಟೀಲ್ ಮತ್ತು ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಫ್ರಾಜ್ ಖಾನ್ ನಡುವೆ ನಡೆದ ಸಂಭಾಷಣೆಯ ಆಡಿಯೋ ವೈರಲ್ ಆಗಿ ಮಾತಾಡಿದ್ದು ತಾನೇ ಎಂದು ಖುದ್ದು ಪಾಟೀಲ್ ಇವತ್ತು ಬೆಂಗಳೂರಲ್ಲಿ ಹೇಳಿದ್ದರೂ ಶಿವಕುಮಾರ್ ಅದನ್ನು ಒಪ್ಪುತ್ತಿಲ್ಲ. ವಿರೋಧ ಪಕ್ಷದ ನಾಯಕರು ಹಿಂದೆ ಬಸವರಾಜ ರಾಯರೆಡ್ಡಿ ಮಾಡಿದ ಆರೋಪವನ್ನು ಉಲ್ಲೇಖಿಸಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎನ್ನುತ್ತಿದ್ದಾರೆ.