ಪ್ರತಿಭಟನೆಯ ಭಾಗವಾಗಿ ಬಂದ್ ಮಾಡಿಸುವುದು ಕ್ಲೀಷೆ ಅನಿಸುತ್ತಿದೆ. ಇದರಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ. ಪ್ರತಿಭಟನೆ ಮಾಡುವ ಹಕ್ಕು ಸಂವಿಧಾನ ಪ್ರತಿಯೊಬ್ಬ ಭಾರತೀಯನಿಗೆ ನೀಡಿದೆ ಅದು ಬೇರೆ ವಿಷಯ. ಅದರೆ ಪ್ರತಿಭಟನೆ ಮಾಡಲಿಚ್ಛಿಸುವವರು ಬಂದ್ಗೆ ಹೊರತಾಗಿ ಬೇರೆ ರೀತಿಯಲ್ಲಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಧರಣಿ ನಡೆಸುವ ಮಾರ್ಗಗಳನ್ನು ಹುಡುಕಬೇಕು.