ಮಂಡ್ಯ ಬಂದ್​ಗೆ ನೀರಸ ಪ್ರತಿಕ್ರಿಯೆ

ಪ್ರತಿಭಟನೆಯ ಭಾಗವಾಗಿ ಬಂದ್ ಮಾಡಿಸುವುದು ಕ್ಲೀಷೆ ಅನಿಸುತ್ತಿದೆ. ಇದರಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ. ಪ್ರತಿಭಟನೆ ಮಾಡುವ ಹಕ್ಕು ಸಂವಿಧಾನ ಪ್ರತಿಯೊಬ್ಬ ಭಾರತೀಯನಿಗೆ ನೀಡಿದೆ ಅದು ಬೇರೆ ವಿಷಯ. ಅದರೆ ಪ್ರತಿಭಟನೆ ಮಾಡಲಿಚ್ಛಿಸುವವರು ಬಂದ್​ಗೆ ಹೊರತಾಗಿ ಬೇರೆ ರೀತಿಯಲ್ಲಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಧರಣಿ ನಡೆಸುವ ಮಾರ್ಗಗಳನ್ನು ಹುಡುಕಬೇಕು.