ಉನ್ನತ ಮಟ್ಟದ ತನಿಖೆಯಾಗಬೇಕು ಅಂತ ತಮ್ಮ ಸಮುದಾಯ, ಅನೇಕ ಸಂಘಸಂಸ್ಥೆಗಳು ಮತ್ತು ನಾಡಿನ ಜನ ಆಗ್ರಹಸಿದ್ದರು, ಆ ಬೇಡಿಕೆಗೆ ಮನ್ನಣೆ ನೀಡಿರುವ ಮುಖ್ಯಮಂತ್ರಿಯವರಿಗೆ ತಮ್ಮ ಕುಟುಂಬ, ಸಮುದಾಯ ಮತ್ತು ನೇಹಾಗೆ ನ್ಯಾಯ ಸಿಗಬೇಕು ಅಂತ ಹೋರಾಡುತ್ತಿರುವ ಎಲ್ಲರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ನಿರಂಜನ ಹಿರೇಮಠ ಹೇಳಿದರು.