ಗದಗ ನಗರದ ಹೊರವಲಯದಲ್ಲಿರುವ ಮುಳುಗುಂದ ನಾಕಾದ ಬಳಿ ಅಪಘಾತ ಸಂಭವಿಸಿದೆ. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಹಾಗೆ, ಯಶ್ ಬೆಂಗಾವಲು ಪಡೆಯ ಜೀಪು ನಿಖಿಲ್ ಓಡಿಸುತ್ತಿದ್ದ ಬೈಕ್ ಗೆ ಗುದ್ದಿದೆ. ಆದರೆ ಮೃತನ ಮಾವ ಹೇಳುವ ಪ್ರಕಾರ ಖಾಸಗಿ ಜೀಪೊಂದು ಅಪಘಾತಕ್ಕೆ ಕಾರಣವಾಗಿದೆ. ವಾಹನ ಯಾವುದಾದರೇನು, ಅಭಿಮಾನದ ಅತಿರೇಕಕ್ಕೆ ಮತ್ತು ಯುವಜೀವ ಬಲಿಯಾಗಿದೆ.