ನಿರಂಜನ ಹಿರೇಮಠ, ನೇಹಾ ಹಿರೇಮಠ ತಂದೆ

ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ, ಡ್ರಗ್ಸ್ ಧಂದೆ ಎಗ್ಗಿಲ್ಲದೆ ನಡೆಯುತ್ತಿರುವಂತೆಯೇ ಬೇರೆಲ್ಲ ಕಳ್ಳ ವ್ಯವಹಾರಗಳನ್ನು ತಡೆಯುವವರು ಯಾರೂ ಇಲ್ಲ. ನೇಹಾ ಕೊಲೆ ನಡೆದಾಗಲೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಶನರ್ ರನ್ನು ಟ್ರಾನ್ಸ್ ಫರ್ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ ಎಂದು ಹೇಳಿದ ನಿರಂಜನ್ ನೇಹಾ ಹಂತಕನ್ನು ಎನ್ ಕೌಂಟರ್ ನಲ್ಲಿ ಗತಿ ಕಾಣಿಸಿದ್ದರೆ ಅಂಜಲಿಯ ಕೊಲೆ ನಡೆಯುತ್ತಿರಲಿಲ್ಲ ಎಂದರು.