ಮೃತ ಸುನೀಲ್ ಚವ್ಹಾಣ ಸಹೋದರ ಆನಂದ್

ಮೃತ ಸುನೀಲನ ಕುಟುಂಬಸ್ಥರು ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತಾಡಿರುವ ಆನಂದ್ ಸಹ ಅದನ್ನೇ ಹೇಳುತ್ತಾರೆ, ತನಿಖೆ ಆಗಲಿ, ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಅನ್ನುತ್ತಾರೆ. ಮನೆ ಕಟ್ಟುವ ವಿಷಯದಲ್ಲಿ ಸುನೀಲ ಮತ್ತು ಸಹೋದರನ ನಡುವೆ ಮನಸ್ತಾಪ ಉಂಟಾಗಿತ್ತಂತೆ. ಅದು ಇದೇ ಸಹೋದರನೇ ಅಥವಾ ಮತ್ತೊಬ್ಬನೆಯೇ ಅನ್ನೋದು ಇನ್ನೂ ಖಚಿತಪಟ್ಟಿಲ್ಲ.