ಗೃಹ ಸಚಿವ ಜಿ ಪರಮೇಶ್ವರ

ಕೆಲದಿನಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತಾಡುವಾಗ ಸುಧಾಕರ್ ಬಿಜೆಪಿ ಸೇರಿದ್ದಕ್ಕೆ ಒಂದು ಬಗೆಯ ಹತಾಶೆ ಮತ್ತು ವಿಷಾದದ ಭಾವದಲ್ಲಿ ಮಾತಾಡಿದ್ದರು. ಕಾಂಗ್ರೆಸ್ ನಲ್ಲೇ ಉಳಿದಿದ್ದರೆ ಶಾಸಕರಂತೂ ಆಗೇ ಆಗುತ್ತಿದ್ದಿರಿ ಅಂತ ಬೆಂಬಲಿಗರು ಹೇಳುತ್ತಿದ್ದಾರೆ ಎಂದಿದ್ದರು. ಅವರು ತಮ್ಮ ಮನದಾಳದ ಮಾತನ್ನು ಬೆಂಬಲಿಗರ ಮೇಲೆ ಹಾಕಿ ಹಾಗೆ ಹೇಳಿರಬಹುದು ಎಂದು ರಾಜಕೀಯ ಪರಿಣಿತರು ಹೇಳುತ್ತಿದ್ದಾರೆ