ಮಧ್ಯಾಹ್ನ ಸುಮಾರು 1.30ಕ್ಕೆ ಭೂಕಂಪ ಶುರುವಾದ ಕೂಡಲೇ ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ರೋಹಿತ್ ಕುಟುಂಬವನ್ನು ಹೋಟೆಲ್ ಸಿಬ್ಬಂದಿಯೇ ಹೊರಗೆ ಕರೆತಂದು ಊಟ ಮತ್ತು ನೀರಿನ ವ್ಯವಸ್ಥೆ ಮಾಡಿತಂತೆ. ಸಾಯಂಕಾಲ 4.30ರವರೆಗೆ ಯಾರೂ ಕಟ್ಟಡಗಳಲ್ಲಿ ಇರಬಾರದು ಎಂದು ಅಲ್ಲಿನ ಸರ್ಕಾರ ಸೂಚನೆ ನೀಡಿದ್ದರಿಂದ ಜನರೆಲ್ಲ ಮನೆ, ಹೋಟೆಲ್, ಆಫೀಸುಗಳಿಂದ ಹೊರಬಂದು ನಿಂತಿದ್ದರಂತೆ.