ನಮ್ಮ ಸಮಾಜವನ್ನು ಒಡೆಯುವುದು ಮತ್ತು ಸಮುದಾಯಗಳ ನಡುವೆ ಹಗೆ ಹುಟ್ಟಿಸುವುದಷ್ಟೇ ಉಗ್ರರ ಉದ್ದೇಶವಾಗಿದೆ, ಅವರ ಉದ್ದೇಶಗಳನ್ನು ಪರಾಭವಗೊಳಿಸಲು ಭಾರತೀಯರೆಲ್ಲ ಒಗ್ಗಟ್ಟಾಗಬೇಕಿದೆ, ದೇಶದ ನಾನಾ ಭಾಗಗಳಲ್ಲಿರುವ ಅಮಾಯಕ ಕಾಶ್ಮೀರಿಗಳ ಮೇಲೆ ಹಲ್ಲೆ ನಡೆಯುತ್ತಿರುವುದು ಅತ್ಯಂತ ದುಃಖಕರ ಸಂಗತಿ, ಹೀಗೆ ಮಾಡೋದು ಬೇಡ ಎಂದು ಎಲ್ಲರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.