ರಾಜ್ಯಪಾಲ ಅವರು ಮುಖ್ಯಮಂತ್ರಿಯವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದರೆ, ಅದನ್ನು ಎದುರಿಸಲು ಸರ್ಕಾರದ ಮುಂದಿರುವ ದಾರಿಗಳ್ಯಾವು ಅನ್ನೋದನ್ನು ಆಗಸ್ಟ್ 15 ರಂದು ತುಮಕೂರಲ್ಲಿ ಗೃಹ ಸಚಿವ ಜಿ ಪರಮೇಶ್ವ ರ್ ಅವರು ಕೂಲಂಕುಷವಾಗಿ ವಿವರಿಸಿದ್ದರು. ಕಾನೂನು ಹೋರಾಟ ನಡೆಸಲು ಸರ್ಕಾರಕ್ಕೆ ಅವಕಾಶವಿದೆ ಎಂದು ಅವರು ಹೇಳಿದ್ದರು.