ಆತ ಬಡ ರೈತ.. ಕೈ ತುಂಬಾ ಸಾಲ ಸೂಲ ಮಾಡ್ಕೊಂಡು ಟೊಮ್ಯಾಟೋ ಬೆಳೆ ಹಾಕಿದ್ದ.. ಇನ್ನೇನು ಬೆಳೆ ಕೈ ಹಿಡಿಯಿತು ಮಾಡಿದ್ದ ಸಾಲವನ್ನ ತೀರಿಸೋಣ ಎಂದು ಕನಸು ಕಾಣುತ್ತಿದ್ದ ಅನ್ನದಾತ ಈಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಒಂದುವರೆ ಎಕರೆಯಲ್ಲಿ ಬೆಳೆದ ಟೊಮ್ಯಾಟೋ ಬೆಳೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಮಣ್ಣು ಪಾಲಾಗಿದೆ.ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ. ಕಣ್ಣಾಡಿಸಿದ ಕಡೆಯಲ್ಲಾ ಟೊಮ್ಯಾಟೋ ಗಿಡಗಳದ್ದೆ ಕಲರವ.. ಎತ್ತ ನೋಡಿದ್ರು ಬೆಳೆದು ನಿಂತಿರುವ ಟೊಮ್ಯಾಟೋ.. ಇನ್ನೇನು ಒಂದು ವಾರ ಕಳೆದಿದ್ರೆ ಬೆಳೆದ ಟೊಮ್ಯಾಟೋವನ್ನ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಸಂಪಾದಿಸ ಬಹುದಿತ್ತು. ಅಷ್ಟರಲ್ಲಾಗಲೇ ಕಿರಾತಕರ ಕಣ್ಣು ಬೆಳೆದು ನಿಂತ ಟೊಮ್ಯಾಟೋ ಗಿಡದ ಮೇಲೆ ಬಿದ್ದಿದೆ.ಬರೋಬ್ಭರಿ ಒಂದುವರೆ ಎಕರೆ ಜಮೀನಿನಲ್ಲಿ ಬೆಳೆದು ನಿಂತಿದ್ದ ಟಮ್ಯಾಟೋ ಗಿಡವನ್ನ ಬೇರು ಸಮೇತ ಕಿತ್ತಾಕಲಾಗಿದೆ. ಇದರಿಂದ ಕಂಗಾಲಾದ ರೈತ ಈಗ ಕಣ್ಣೀರು ಹಾಕುತ್ತಾ ಗೊಳಾಡುವಂತ ಪರಿಸ್ಥಿತಿ ಎದುರಾಗಿದೆ.