ಬಿಆರ್ ಪಾಟೀಲ್, ಶಾಸಕ

ರಾಜಕೀಯ ನಾಯಕರು ಯಾವುದೇ ಪಕ್ಷದವರಾಗಿರಲಿ, ಅಧಿಕಾರ ಸಿಗದಿದ್ದರೆ ಗೊಣಗಾಡುತ್ತಾರೆ, ಅಸಮಾಧಾನಗೊಳ್ಳುತ್ತಾರೆ ಮತ್ತು ಕೆಲವರು ಪಕ್ಷ ತೊರೆಯುವ ಬೆದರಿಕೆಯನ್ನೂ ಹಾಕುತ್ತಾರೆ. ಒಮ್ಮೆ ಅಧಿಕಾರ ಸಿಕ್ಕಿತು ಅಂತಾದರೆ, ಅಧಿಕಾರದ ಆಸೆಗಾಗಿ ರಾಜಕಾರಣಕ್ಕೆ ಬಂದಿಲ್ಲ, ಜನರ ಸೇವೆ, ರಾಷ್ಟ್ರದ ಸೇವೆ ಮಾಡಲು ಈ ಕ್ಷೇತ್ರ ಆರಿಸಿಕೊಂಡಿದ್ದಾಗಿ ಪೋಸು ಬಿಗಿಯುತ್ತಾರೆ. ಪಾಟೀಲ್ ಬೇರೆ ಗ್ರಹದವರೇನೂ ಅಲ್ಲವಲ್ಲ?