ಬಿಜೆಪಿ ನಾಯಕರಿಗೆ ಸಂಸದೀಯ, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ನಮ್ಮ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಅವರಲ್ಲಿ ಮೆದುಳನ್ನು ರಾಜಕೀಯದ ಮಂಜು ಆವರಿಸಿದೆ. ಕಾಮಾಲೆಯಾದವರಿಗೆ ಜಗತ್ತೆಲ್ಲ ಹಳದಿ ಕಾಣುತ್ತಂತೆ, ಹಾಗಿದೆ ಇವರ ಸ್ಥಿತಿ ಎಂದು ಅವರು ಹೇಳಿದರು.