ನಂಜನಗೂಡು ಶ್ರೀಕಂಠೇಶ್ವರ ರಥೋತ್ಸವ

ಜಿಲ್ಲೆಯ ನಂಜನಗೂಡನನ್ನು ದಕ್ಷಿಣದ ಕಾಶಿ ಅಂತ ಕರೆಯುವುದು ಕನ್ನಡಿಗರಿಗೆ ಗೊತ್ತಿಲ್ಲದೇನಿಲ್ಲ. ಪಂಚರಥಗಳ ಮೆರವಣಿಗೆ ವರ್ಷಕ್ಕೊಮ್ಮೆ ನಡೆಯುವ ಮಹಾಮೇಳ. ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಿಂದಲೂ ಭಕ್ತಾದಿಗಳು ಬಂದು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ನಂಜನಗೂಡನ್ನು ಅಭಿವೃದ್ಧಿಪಡಿಸಬೇಕಾದ ಅವಶ್ಯಕತೆಯಂತೂ ಇದೆ. ಭಕ್ತಾದಿಗಳಿಗೆ ಉಳಿದುಕೊಳ್ಳಲು ಒಳ್ಳೊಳ್ಳೆ ಹೋಟೆಲ್​ಗಳ ಅಗತ್ಯವಿದೆ.