ಜಾಮೀನು ಸಿಕ್ಕ ನಂತರ ತನ್ನ ತಮ್ಮ ಬೆಂಗಳೂರಿಗೆ ಹೋಗಿದ್ದಾನೆಯೇ ಹೊರತು ಕಾಂಗ್ರೆಸ್ ನಾಯಕರು ಹೇಳುತ್ತಿರುವ ಹಾಗೆ ತಲೆಮರೆಸಿಕೊಂಡಿಲ್ಲ ಎಂದು ಪ್ರತಾಪ್ ಸಿಂಹ ಹೇಳುತ್ತಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ರೂ. 6.5 ಕೋಟಿಯ ಚೆಕ್ ಬೌನ್ಸ್ ಪ್ರಕರಣ ಬೆಳಕಿಗೆ ಬರೋದನ್ನು ತಡೆಯಲು ಕಾಂಗ್ರೆಸ್ ವಿಕ್ರಮ ಸಿಂಹ ವಿರುದ್ಧ ಆರೋಪಗಳನ್ನು ಹೊರೆಸಿ ವಿಷಯಾಂತರ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಹೇಳಿದರು.