ಬಸ್ಸಾಪುರದಲ್ಲಿ ರಂಗಪ್ಪನವರ ಮೆರವಣಿಗೆ ಸಾಗುತ್ತಿರುವ ರಸ್ತೆಯ ಪಕ್ಕದಲ್ಲೇ ಒಂದು ಪ್ರಾಥಮಿಕ ಶಾಲೆಯಿದೆ. ಅಲ್ಲಿ ಓದುವ ಮಕ್ಕಳು ಡೊಳ್ಳು ಮತ್ತು ತಮಟೆ ಬಾರಿಸುವ ಸದ್ದು ಕೇಳಿ ಹೊರಗೋಡಿ ಬಂದು ಕುಣಿಯುತ್ತಾರೆ. ಈ ಶಾಲಾ ಮಕ್ಕಳಿಗೆ ರಂಗಪ್ಪ ಒಂದು ಸ್ಫೂರ್ತಿಯಾಗಲಿದ್ದಾರೆ, ಶಾಲಾಮಕ್ಕಳಿಗೆ ಮಾತ್ರ ಅವರು ಪ್ರೇರಣೆಯೆಂದರೆ ತಪ್ಪಾಗುತ್ತದೆ, ಅವರು ತಮ್ಮ ಜಿಲ್ಲೆ ಮತ್ತು ರಾಜ್ಯದ ಜನತೆಗೂ ಮಾದರಿ.