‘ಅಂದು ರಾಜ್​ಕುಮಾರ್​​ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ನೆನಪಿನ ಪುಟ ತೆರೆದ ಚಿನ್ನೇಗೌಡ

ಕಾವೇರಿ ನೀರಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಸಾಥ್​ ನೀಡಿದೆ. ವಾಟಾಳ್​ ನಾಗರಾಜ್​ ಅವರು ವಾಣಿಜ್ಯ ಮಂಡಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರ ಕುರಿತು ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್​.ಎ. ಚಿನ್ನೇಗೌಡ ಅವರು ಮಾತನಾಡಿದ್ದಾರೆ. ‘ವಾಟಾಳ್​ ನಾಗರಾಜ್​ ಅವರು ಕನ್ನಡದ ಕಟ್ಟಾಳು. ಸಾರಾ ಗೋವಿಂದು ಕೂಡ ಸಾಮಾನ್ಯ ವ್ಯಕ್ತಿ ಅಲ್ಲ. ಅವರೆಲ್ಲರೂ ಇದ್ದಲ್ಲಿ ಹೋರಾಟಕ್ಕೆ ಜಯ ಇರುತ್ತದೆ. ರಾಜ್​ಕುಮಾರ್​ ನಟನೆಯ ‘ರಣಧೀರ ಕಂಠೀರವ’ ಸಿನಿಮಾಗೆ ಚಿತ್ರಮಂದಿರ ಸಿಕ್ಕಿರಲಿಲ್ಲ. ಆಗ ಕೆಜಿ ರಸ್ತೆ ಹಿಂದಿಮಯ ಆಗಿತ್ತು. ನಂತರ ವಾಟಾಳ್​ ನಾಗರಾಜ್​ ಅವರು ಬಂದು ‘ಹಿಮಾಲಯ’ ಟಾಕೀಸ್​ನಲ್ಲಿ ‘ರಣಧೀರ ಕಂಠೀರವ’ ಚಿತ್ರದ ಪ್ರದರ್ಶನಕ್ಕೆ ಅವಕಾಶ ಕೊಡಿಸಿದ್ದರು’ ಎಂದು ಎಸ್​.ಎ. ಚಿನ್ನೇಗೌಡ ಅವರು ನೆನಪಿನ ಪುಟ ತೆರೆದಿದ್ದಾರೆ.