ಬೀದರ್​​ನಲ್ಲಿ ಬಿವೈ ವಿಜಯೇಂದ್ರ

ವಿಜಯೇಂದ್ರ, ಡಾ ಸಿಎನ್ ಅಶ್ವಥ್ ನಾರಾಯಣ, ಬಸವರಾಜ್ ಭೈರತಿ ಅವರನ್ನೊಳಗೊಂಡ ತಂಡ ಈ ಭಾಗದಲ್ಲಿ ಹೋರಾಟ ಮಾಡುವುದು ಬೇಕಿರಲಿಲ್ಲ, ಅವರು ಮಧ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಮಾಡಿದ್ದರೆ ಅವರ ಹೋರಾಟಕ್ಕೆ ಬೆಲೆ ಬರುತಿತ್ತು. ಒಂದೇ ಕಾರಣಕ್ಕಾಗಿ ಒಂದೇ ಪಕ್ಷದ ಎರಡು ತಂಡಗಳು ಪ್ರತ್ಯೇಕವಾಗಿ ಹೋರಾಟ ಮಾಡೋದು ರೈತರಿಗೆ ಹಾಸ್ಯಾಸ್ಪದ ಅನಿಸುತ್ತಿದೆ.