ದೇವಸ್ಥಾನದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ದೇವೇಗೌಡರು, ಹೈಕೋರ್ಟ್ ತೀರ್ಪನ್ನು ಓದದೆ ಪ್ರಜ್ವಲ್ ಅನರ್ಹಗೊಂಡಿರುವ ಬಗ್ಗೆ ಮಾತಾಡುವುದು ಒಬ್ಬ ಮಾಜಿ ಪ್ರಧಾನ ಮಂತ್ರಿಯಾಗಿ ತಮಗೆ ಸರಿಯೆನಿಸದು ಅಂತ ಹೇಳಿದರು. ಅವರನ್ನು ಅನರ್ಹಗೊಳಿಸಲಾಗಿದೆ ಎಂಬ ಒಂದು ವಾಕ್ಯ ಮಾತ್ರ ತಮಗೆ ಗೊತ್ತಾಗಿದೆ ಎಂದು ಮಾಜಿ ಪ್ರಧಾನಿ ಹೇಳಿದರು.