ಕೋಲಾರದ ನಾಯಕರನ್ನೆಲ್ಲ ತಾನೇ ಮುಖ್ಯವಾಹಿನಿಗೆ ತಂದಿದ್ದು ಅಂತ ಮುನಿಯಪ್ಪ ಹೇಳಿರುವುದಕ್ಕೆ ಕೆರಳಿದ ನಜೀರ್, ಅವರು ಹಿಂದಿನದೆಲ್ಲ ಮರೆತಂತಿದೆ, 1991 ರಲ್ಲಿ ತಾನು ಮಂತ್ರಿಯಾಗಿದ್ದಾಗ ಮುನಿಯಪ್ಪ ಒಂದು ಬ್ಯಾಗ್ ಹಿಡಿದುಕೊಂಡು ನನ್ನ ಹಿಂದೆ ಸುತ್ತುತ್ತಿದ್ದರು ಎಂದರು. ರಾಜೀನಾಮೆ ಸಲ್ಲಿಸುವುದು ತನ್ನ ಮೂಲಭೂತ ಹಕ್ಕು ಎಂದ ಅವರು ಮುಖ್ಯಮಂತ್ರಿಯವರ ಜೊತೆ ಮಾತಾಡಿದ ಬಳಿಕ ಅದನ್ನು ಸಲ್ಲಿಸುವುದಾಗಿ ಹೇಳಿದರು.