ಸಿಟಿ ರವಿ ಸುದ್ದಿಗೋಷ್ಟಿ

ರಾಮನಗರದಲ್ಲೂ ವಕೀಲನೊಬ್ಬ ಗ್ಯಾನವಾಪಿ ಮಸೀದಿಗೆ ಸಂಬಂಧಿಸಿದಂತೆ ವಾರಣಾಸಿಯ ಕೋರ್ಟೊಂದು ನೀಡಿರುವ ತೀರ್ಪನ್ನು ಮನಬಂದಂತೆ ನಿಂದಿಸಿದ್ದಾನೆ. ಹಾಗಾಗಿ ಯಾವ ಪಿತೂರಿ ನಡೆಯುತ್ತಿದೆ, ಪಿತೂರಿಗಾರರ ಹುನ್ನಾರ ಏನು? ಅನ್ನೋದು ಗೊತ್ತಾಗಬೇಕು. ಯಾಕೆಂದರೆ ಈ ಎರಡು ಘಟನೆಗಳು ಬೇರೆ ಬೇರೆಯಾಗಿರುವುದು ಸಾಧ್ಯವಿಲ್ಲ, ಸಮಗ್ರ ತನಿಖೆಯಾಗಬೇಕು ಎಂದು ರವಿ ಹೇಳಿದರು.