ಉಳ್ಳಾಲದ ಕನೀರುತೋಟದ ವೈದ್ಯನಾಥ ದೈವದ ವಲಸರಿ ಸಮಯದಲ್ಲಿ ಗದ್ದೆಯಲ್ಲಿ ಪತ್ತೆಯಾದ ತ್ಯಾಜ್ಯದಿಂದ ದೈವ ಕೋಪಗೊಂಡಿದೆ. ದೈವದ ಆಕ್ರೋಶದ ವಿಡಿಯೋ ವೈರಲ್ ಆಗಿದೆ. ಐಸ್ ಕ್ರೀಮ್ ಪ್ಯಾಕ್ಗಳು ಮತ್ತು ಇತರ ಕಸದಿಂದ ಮಲಿನವಾಗಿದ್ದ ಗದ್ದೆಯಲ್ಲಿ ವಲಸರಿ ನಡೆಯಲು ದೈವ ನಿರಾಕರಿಸಿದೆ. ಈ ಘಟನೆಯಿಂದ ದೈವಸ್ಥಾನದ ಆಡಳಿತ ಮಂಡಳಿ ಕಕ್ಕಾಬಿಕ್ಕಿಯಾಗಿದೆ.